Archive For The “General” Category

ಕೋವಿಡ್ ಸಮಯದಲ್ಲಿ ಹಲವಾರು online ಇವೆಂಟ್ ಮ್ಯಾನೇಜ್ಮೆಂಟ್ ಗುಂಪುಗಳು, ಚಾನೆಲ್ಸ್ ಗಳು ಹುಟ್ಟಿಕೊಂಡಿವೆ. ಹಲವಾರು ಕಾರ್ಯಕ್ರಮಗಳನ್ನು ಜೂಮ್ ಮೂಲಕ ನಡೆಸಲಾಗುತ್ತಿದೆ. ಇವೆಲ್ಲಾ ಆಗುತ್ತಿರುವುದು ಒಳ್ಳೆಯದೇ. ಇತ್ತೀಚಿಗೆ ಜಾಲತಾಣಗಳಲ್ಲಿ ಪ್ರಚಲಿತವಿರುವ ಸಾಗರೋತ್ತರ ಕನ್ನಡಿಗರು ಎಂಬ ಗುಂಪು ತಾವು ೫೫ ದೇಶದ ಸಾಗರೋತ್ತರ ಕನ್ನಡಿಗರನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಜೂಮ್ ಕಾರ್ಯಕ್ರಮದ ಮೂಲಕ ಗಣ್ಯ ವ್ಯಕ್ತಿಗಳನ್ನು, ರಾಜಕಾರಿಣಿಗಳನ್ನು, ಸ್ವಾಮೀಜಿಗಳನ್ನು ವೇದಿಕೆಗೆ ತಂದು ಗೌರವಿಸಿತ್ತಿರುವುದು ಒಳ್ಳೆಯ ವಿಷಯವಾದರೂ, ೨೫ ಜೂಮ್ ಕಾರ್ಯಕ್ರಮ ಮಾಡಿ ನಾವು ೨೫ ನೇ ಬೆಳ್ಳಿ ಹಬ್ಬ ಆಚರಿಸುತ್ತಿದ್ದೇವೆ ಎಂದು…

ಸ್ನೇಹಿತರೇ, ನಮಸ್ಕಾರ. ಈ ವಾರಾಂತ್ಯ ಅಂದರೆ ಭಾನುವಾರ ದಿನಾಂಕ ೧೭ ನೇ ಜನವರಿಯಂದು ಒಂದು ವಿಶೇಷ ಯಕ್ಷಗಾನ ಕಾರ್ಯಕ್ರಮವನ್ನು ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಯುನೈಟೆಡ್ ಕಿಂಗ್ಡಮ್ (ಆಯಾಮ) ಹಮ್ಮಿಕೊಂಡಿದೆ. ನಮ್ಮ ಕರಾವಳಿಯ ಹೆಮ್ಮೆಯ ಯಕ್ಷಗಾನ ಜಾಲತಾಣದ ಮೂಲಕ ಯುಕೆಯ ಮನೆ ಮನೆಗಳಲ್ಲಿ ತಲುಪುತ್ತಿರುವುದು ಒಂದು ವಿಶೇಷವಾದ ಸಂತೋಷವೇ! ಪ್ರತಿ ವರ್ಷ ಬಣ್ಣ ವೇಷ ಧರಿಸಿ ನಮ್ಮ ಯುಕೆ ಕನ್ನಡಿಗ, ಲೇಖಕ ಹಾಗೂ ವಿಮಾನ ತಾಂತ್ರಿಕ ತಜ್ಞ ಯೋಗಿಂದ್ರ ಮರವಂತೆ ಯಕ್ಷಗಾನದ ಪ್ರಚಾರ ಮಾಡುತ್ತಿರುವುದನ್ನು ನಾವು ನೋಡಿದ್ದೇವೆ….

ಭಾನುವಾರ ಭಾಗೀರಥಿ ಗುರುಮಾ ಅವರ ಸರಳ ಸುಂದರ ಯೋಗ ಮಾಡಿದ ನೋವು ಇನ್ನೂ ಇದೆಯಲ್ವಾ ಎಂದು ಸೋಮವಾರ ಹಾಸಿಗೆಯಿಂದ ಎದ್ದಾಗ ಸ್ವಲ್ಪ ಆಶ್ಚರ್ಯ ಎನ್ನಿಸಿತು. ಸೋಮವಾರ ಬೆಳಿಗ್ಗೆ ಎದ್ದಾಗ ಯಾಕೋ ತಲೆ ಎಲ್ಲ ಗಿರ್ ಗಿರ್ ಎನ್ನುತಿದೆ, ಸುಸ್ತಾಗುತ್ತಿದೆ ಎಂದು ಅನುಭವಾಗತೊಡಗಿತು. ಹಾಗೋ ಹೀಗೋ ದಿನ ಕಳೆದೆ. ಮಂಗಳವಾರ ಬೆಳಿಗ್ಗೆ ಭಾರತದಿಂದ ಅಪರೂಪದ ಕರೆ… ಗಣಪತಿ ಭಟ್ಟರೇ ಸುವರ್ಣ ಟಿವಿ ಯಲ್ಲಿ ಕೋವಿಡ್ ಬಗ್ಗೆ ಒಂದು ಚರ್ಚೆ ಇದೆ ಬರ್ತೀರಾ ಎಂದು. ಹೂ ಎಂದು ಒಪ್ಪಿಕೊಂಡೆ. ಯುನೈಟೆಡ್…

ಈ ವರ್ಷ ಕನ್ನಡ ಕಾಯಕ ವರ್ಷ ಎಂದು ಈಗಾಗಲೇ ಕನ್ನಡ ಪ್ರಾಧಿಕಾರ ಘೋಷಿಸಿದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ತಮ್ಮ ಲಾಂಛನದೊಂದಿಗೆ ಘೋಷಿಸಲಾಗಿದೆ. ಇದೇ ನಿಟ್ಟಿನಲ್ಲಿ ನಮ್ಮ ಯುನೈಟೆಡ್ ಕಿಂಗ್ಡಮ್ ನ ಕನ್ನಡ ಕಲಿ ಅಭಿಯಾನ ಅತ್ಯಂತ ಉತ್ಸಾಹದಿಂದ ಸುಮಾರು ೫೦ ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಶಿಕ್ಷಕ ಶಿಕ್ಷಕಿಯರೊಂದಿಗೆ ಭರದಿಂದ ಸಾಗುತ್ತಿದೆ. ಕನ್ನಡಿಗರುಯುಕೆ ಸಂಸ್ಥೆಯ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಕನ್ನಡ ಕಲಿ ಕಾರ್ಯಕ್ರಮದ ವಿಶೇಷತೆಯೆಂದರೆ ಶೇಕಡಾ ೯೯ಕ್ಕೂ ಹೆಚ್ಚು ಕನ್ನಡ ಕಲಿಸುವ…

ಜಗತ್ತೇ ಕರೋನ ಮಹಾಮಾರಿಯಿಂದ ಬಳಲಿ ಸುಸ್ತಾಗಿರುವಾಗ ಯುಕೆ ಹವ್ಯಕರನ್ನು ಹುರಿದುಂಬಿಸಲು ಆಯೋಜನ ಸಮಿತಿ ಈ ಬಾರಿ ಐದನೇ ವರ್ಷದ ಪ್ರಯುಕ್ತ ಒಂದು ವಿಶೇಷ ಕಾರ್ಯಕ್ರಮ ಹವ್ಯಕ ಕಲಾ ಸಂಗಮವನ್ನು ಹಮ್ಮಿಕೊಂಡಿದೆ. ೨೦೧೫ ರಲ್ಲಿ ಹಲವು ಪರಿವಾರಗಳಿಂದ ಶುರುವಾದ ಹವ್ಯಕ ಬಳಗ ಯುನೈಟೆಡ್ ಕಿಂಗ್ಡಮ್ ಇವತ್ತು ೧೦೦ ಕ್ಕೂ ಹೆಚ್ಚು ಪರಿವಾರದ ಸದಸ್ಯತ್ವವನ್ನು ಪಡೆದಿದೆ. ಇಂದು ಹವ್ಯಕ ಬಂಧು ಭಾಂಧವರು ಯುನೈಟೆಡ್ ಕಿಂಗ್ಡಮ್ (HaBBa UK ) ಎಂದು ಪರಿವರ್ತನೆಗೊಂಡಿದೆ. ಆಂಗ್ಲ ಭಾಷೆಗೂ ಹವ್ಯಕರಿಗೂ ಸಾಕಷ್ಟು ಹೋಲಿಕೆ ಇದೆ….

ಮೊನ್ನೆ ಶನಿವಾರ ದಿನಾಂಕ ೨೮ ನವೆಂಬರ್ ನಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ. ಎಸ್. ನಾಗಾಭರಣ ಅವರು ಕನ್ನಡಿಗರುಯುಕೆ ಕಾರ್ಯಕಾರಿ ಸದಸ್ಯರಾದ ಅನಿಲ್ ಕೊಂಡೆಬೆಟ್ಟು, ರಮೇಶ್ ಮರೆಗುದ್ದಿ ಹಾಗೂ ಪವಿತ್ರ ಅವರ ಜೊತೆ ಸುದೀರ್ಘ ಕಾಲ ಮಾತುಕತೆ ನಡೆಸಿದರು. ಅವರ ಜೀವನದಲ್ಲಿ ನಡೆದುಬಂದ ದಾರಿ, ಕನ್ನಡ ಅಂದರೆ ಕೇವಲ ಭಾಷೆಯಲ್ಲ ಆದರೆ ಹೇಗೆ ಮಾತನಾಡುತ್ತೀವೋ ಹಾಗೆಯೇ ಬರೆಯಬಲ್ಲ ಭಾಷೆ ಎಂದು ಮನದಟ್ಟಣೆ ಮಾಡಿ ಕೊಟ್ಟರು ಕನ್ನಡವನ್ನು ನಿರಂತರ ಬೆಳೆಸಿ, ಕನ್ನಡ ರಾಜ್ಯೋತ್ಸವ ಕೇವಲ ರಾಜ್ಯಕ್ಕೆ ಸಂಭದ…

ಸ್ನೇಹಿತರೇ, ನಮಸ್ಕಾರ. ತುಂಬಾ ದಿನಗಳ ನಂತರ ಈ ಒಂದು ಗಾದೆಯ ಬಗ್ಗೆ ಬರೆಯುತ್ತಿದ್ದೇನೆ. ಈ ಕೋವಿಡ್ ಪರಿಸ್ಥಿತಿಯಲ್ಲಿ ನಮ್ಮೆಲ್ಲರ ತಾಳ್ಮೆ ಹೊರತು ಹೋಗಿದೆಯಾ ಎಂಬ ಸಂದೇಹ ನನ್ನನ್ನು ಸದಾ ಕಾಡುತ್ತಿತ್ತು. ಎಂಥಾ ಪ್ರಾರಬ್ಧ ಅಲ್ಲವೇ? ಎಷ್ಟೊಂದು ಜನರಿಗೆ ಮನೆಯಲ್ಲಿ ಕುಳಿತು ಏನು ಮಾಡೋದು ಏನು ಬಿಡೋದು ಎಂದು ತಲೆ ಬಿಸಿ ಆಗುತ್ತಿರುವುದು ಸಾಮಾನ್ಯವಾಗಿದೆ. ಸಾಕಷ್ಟು ಜನ ತಾಳ್ಮೆ ಕಳೆದುಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಅಥವಾ ವಾಟ್ಸಪ್ಪ್ ಗುಂಪುಗಳಲ್ಲಿ ಸದಾ ವಾದ, ನಿಂದನೆ, ಒಬ್ಬರ ಮೇಲೆ ಇನ್ನೊಬ್ಬರು ಕತ್ತಿ…

Dear Friends, Greetings from UK! Today we are all angry, in fear at the same time learning the hard ways to accept that we are just helpless against the nature! We can only do our “Karma” without any expectation but we still need to work for a mission and vision else disastrous end will be…

ನಮಸ್ಕಾರ ಸ್ನೇಹಿತರೇ. ಯುಗಾದಿ ಹಬ್ಬಕ್ಕೆ ಇನ್ನೇನು ಕೇವಲ ಎರಡು ವಾರಗಳಿವೆ. ೨೦೧೯, ನವೆಂಬರ್ ದೀಪಾವಳಿ ಹಾಗೂ ರಾಜ್ಯೋತ್ಸವ ಮುಗಿದಾಗಿನಿಂದ ನಮ್ಮ ಯುಕೆ ಕನ್ನಡಿಗರು ಯುಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ಕನ್ನಡ ಬಳಗ, leicester ಕನ್ನಡ ಪರಿವಾರ, scottish ಕರ್ನಾಕಟ ಸಂಘ, Orpington ಕನ್ನಡ ಆರಂಭ, swindon ಕನ್ನಡ ಬಳಗ, ಮ್ಯಾಂಚೆಸ್ಟರ್ ಕನ್ನಡ ಸಂಘ, ಹ್ಯಾರೋ ಕನ್ನಡ ಕುವೆಂಪು, ಬರ್ಮಿಂಗ್ಹ್ಯಾಮ್ ಕನ್ನಡಿಗರು, cardiff ಕನ್ನಡಿಗರು ಹೀಗೆ ಹಲವಾರು ಕರುನಾಡ ಯುಕೆ ಕನ್ನಡಿಗರು ಈ ಬಾರಿ ವಿಶಿಷ್ಟ…

ನಮಸ್ಕಾರ ಸ್ನೇಹಿತರೆ…!! ಎಂದಿನಂತೆ ಮತ್ತೊಂದು ಮೈ ನವಿರೆಳಿಸಿದ, ನರನಾಡಿಯಲ್ಲಿ ಮಿಂಚನ್ನ ಸಂಚರಿಸುವಂತೆ ಮಾಡಿದ ಅನುಭವದೊಂದಿಗೆ ಮುಕ್ತಾಯಗೊಂಡ ನೆನ್ನೆಯ ದಿನ ನನ್ನ ಜೀವನದ ದಿನಚರಿಯ ಪುಟಗಳಲ್ಲಿ ಮಹತ್ತರವಾದ ಇನ್ನೊಂದು ಪುಟವೆಂದರೆ ತಪ್ಪಾಗಲಾರದೆನೊ. ಎತ್ತಣ ಮಾಮರ ಎತ್ತಣ ಕೋಗಿಲೆ ? ಎತ್ತಣಿಂದೆತ್ತ ಸಂಬಂಧವಯ್ಯ ?! ಬೆಟ್ಟದ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ ?! ಮೇಲಿನ ವಚನದ ಸಾಲುಗಳಲ್ಲಿ ಹೆಳಿದಂತೆ ಇದೆನಪ್ಪಾ ಗೋವರ್ಧನ ಗೂ ನವೋದಯಕ್ಕು “ನವೋದಯನ್” ಗಳಿಗೂ ಎನಪ್ಪಾ ಸಂಬಂಧ ಅಂತಾ ತಲೆ ಕೆರೆಯುವುದಾದರೆ…ಆ ಸಂಬಂಧ ಅಂದಾಜು…